ನಾವು ಬಡವರು

ನಾವು ಮುಟ್ಟಿ ನಿಂತ ಮರದ
ಹೂವು ಉದುರಿತು
ನಾವು ನಡೆದ ಹಾದಿ ಹಸಿರು
ಉರಿದು ಹೋಯಿತು

ನಾವು ಕರೆದ ಕೆಚ್ಚಲಲ್ಲಿ
ಹಾಲು ಬತ್ತಿತು
ನಾವು ಹುಡುಕಿ ಕಂಡ ಹೃದಯ
ರಾಗ ಸತ್ತಿತು

ಸೋತ ಮುಖದ ಮನೆಗೆ ಬಳಿಯೆ
ಸುಣ್ಣ ಸಿಡಿಯಿತು
ಬಡವರೆಂದು, ಕಡೆದ ಕಲ್ಲು
ಕಣ್ಣ ಕಳೆಯಿತು

ಹಸಿರು, ಕೆಂಪು, ಬಟ್ಟಬಯಲು
ಎಲ್ಲ ಒಂದೇ ಬಣ್ಣವು
ಮಣ್ಣ ಹಾದಿ, ಟಾರು ಬೀದಿ
ಕಪ್ಪುಗಟ್ಟಿದ ತಂತಿಯು

ನಿಂತ ನೆಲದ ಬಿರುಕಿನಲ್ಲಿ
ಸುಳಿದಾಡುವ ಉಸಿರು
ಭೂಕಂಪದ ನಡುಕದಲ್ಲು
ಸಾವಿಲ್ಲದ ಹೆಸರು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎಫ್. ಎಮ್. ದೋಸ್ತೋವಸ್ಕಿಯ – Crime and Punishment
Next post ನನ್ನ ಕೆಲಸ

ಸಣ್ಣ ಕತೆ

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

cheap jordans|wholesale air max|wholesale jordans|wholesale jewelry|wholesale jerseys